|
Tuesday, 6 November 2012
Be proud of being an KANNADIGA
Namma Shankarnag - Great Director of India, Hemmeya Kannadiga
ಹೆಸರಿನಲ್ಲಿಯೇ ಒಂದು ವೇಗ, ಹೊಸ ಆಯಾಮ, ಒಂದು ಸಂಚಲನ, ಭಿನ್ನ ಹೆಜ್ಜೆ. ರಂಗಭೂಮಿ, ಚಿತ್ರರಂಗ, ಕಿರುತೆರೆ, ಇನ್ನಿತರ ಸೃಜನಶೀಲ ಪ್ರಕಾರಗಳಲ್ಲಿ ತನ್ನದೇ ಹೆಜ್ಜೆ ಮೂಡಿಸಿದ ಶಂಕರ್ ನಾಗ್, ಇಪ್ಪತ್ತು ವರುಷಗಳ ನಂತರವೂ ಪದೇ ಪದೇ ನೆನಪಾಗುತ್ತಾರೆ. ಸಮಕಾಲೀನ ಆಲೋಚನೆಗಳಿಂದಲೇ ಎಲ್ಲರಿಗೂ ಬೇಕಾದವನಾಗಿ, ಎಲ್ಲರಿಗೂ ಮಾದರಿಯಾಗಿ ಶಂಕರ್ ನಮ್ಮ ಜೊತೆ ಜೊತೆಗೆ ಬೆಳೆದು ಬರುತ್ತಿರುತ್ತಾರೆ. ಮಾಲ್ಗುಡಿ ಡೇಸ್ ನಂತಹ ಧಾರಾವಾಹಿಗಳ ನಿರ್ಮಾಣಕ್ಕಾಗಲಿ, ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಯಿರಲಿ, ಮಿಂಚಿನ ಓಟವಾಗಲಿ ಅಥವಾ ಗೀತಾದಲ್ಲಿನ ಕುಣಿತಕ್ಕಾಗಲಿ ನಮ್ಮ ಶಂಕರ್ ನಾಗ್ ನಮ್ಮ ಶಂಕರ್ ನಾಗ್ ಆಗಿಯೇ ಉಳಿಯುತ್ತಾರೆ. ಇನ್ನೆಷ್ಟೇ ಕಾಲವಾಗಲಿ, ಯಾವ ಹೊಸ ಅಲೆಯೇ ಬರಲಿ ರಸ್ತೆಯ ಆಟೋಗಳ ಮೇಲೆ, ಸ್ಟಿಕ್ಕರುಗಳಲ್ಲಿ, ಡ್ರೈವರುಗಳ ಮನಸ್ಸುಗಳಲ್ಲಿ, ಅಸಂಖ್ಯ ಅಭಿಮಾನಿಗಳ ನೆನಪುಗಳಲ್ಲಿ ಶಂಕರ್ ಬೆರೆತಿರುತ್ತಾರೆ. ಶಂಕರನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದು ಇಡೀ ಕನ್ನಡ ನಾಡೇ ಬಲ್ಲ ಸಂಗತಿ.ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ನಟ, ಅವರ ಸೇವೆ ಅತ್ಯಲ್ಪ ಸಮಯವಾದರೂ ಮರೆಯಲಾಗದ ನೆನಪು ಬಿಟ್ಟಿದ್ದಾರೆ.ಕನ್ನಡ ನಾಡು ಶಂಕರನಂತಹ ಸುಂದರ ಕನಸಿಗರಿಲ್ಲದೆ ಸೊರಗುತ್ತಿರಬಹುದೆಂಬ ಅನಿಸಿಕೆಯನ್ನು ನಿರಂತರವಾಗಿರಿಸಿದೆ. ಶಂಕರನಂತವರು ಹೆಚ್ಚು ಹೆಚ್ಚಾಗಿ ಈ ನಾಡಿನಲ್ಲುದಯಿಸಲಿ. NO ONE HAD A BETTER VISION THAN HIM IN DIRECTING, THE REVOLUTIONIST UNMATCHABLE!!! Tribute to Shankarnag
About Mysore
ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ, ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ' ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಾಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಕ್ಯಾತಿಯನ್ನೂ ಪಡೆದಿದೆ.
ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ ಇತ್ಯಾದಿ.ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ,ಜಗನ್ಮೊಹನ ಅರಮನೆ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ, ರಂಗನತಿಟ್ಟು, ಬಂಡಿಪುರ,ತಲಕಾಡು,ಮುಡುಕುತೊರೆ ತಿರುಮಕೂಡಲು ನರಸೀಪುರ ಇತ್ಯಾದಿ.
ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ ಇದರ ಮೂಲ ಹೆಸರು ಮಹಿಷಪುರಿ ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. ಮಹಿಷ ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ ಈತ ಮಾನವ ಮತ್ತು ಎಮ್ಮೆ ಎರಡೂ ರೂಪದಲ್ಲಿ ಇರುವ ವ್ಯಕ್ತಿ . ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಶಾಸುರನು ಆಳುತ್ತಿದ್ದ , ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿಷೂರು ಮಹಿಸೂರಾಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ 2005 ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಇಂಗ್ಲೀಷ್ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ, ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ.
ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ. ಕೆ.ಆರ್.ಎಸ್. ಎಂದೇ ಖ್ಯಾತವಾದ ಈ ಜಲಾಶಯ ಬುದ್ಧಿಶಕ್ತಿಗೆ ಹೆಸರಾದ ಭಾರತರತ್ನ ವಿಶ್ವೇಶ್ವರಯ್ಯನವರ ಕೊಡುಗೆಯಲ್ಲಿ ಪ್ರಮುಖವಾದ್ದು. ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ ಕೆ.ಜಿ.ಎಫ್. ಇಷ್ಟು ವರ್ಷಗಳ ಕಾಲ ಚಿನ್ನವನ್ನು ತೆಗೆಯುತ್ತಲೂ ಇರಲಿಲ್ಲ, ಶಿವನ ಸಮುದ್ರದಲ್ಲಿ ನಿರಂತರ ವಿದ್ಯುತ್ ಉತ್ಪಾದನೆಯೂ ಆಗುತ್ತಿರಲಿಲ್ಲ ಮಿಗಿಲಾಗಿ ಮಂಡ್ಯ ಮತ್ತು ಮಳವಳ್ಳಿಯ ಬರಡು ಭೂಮಿ ಇಂದು ಕಬ್ಬಿನ ಬೆಳೆ ತೆಗೆವ ಬಂಗಾರದ ನಾಡೂ ಆಗುತ್ತಿರಲಿಲ್ಲ. ಕೋಲಾರ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುತ್ತಿದ್ದ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಬೇಸಿಗೆಯಲ್ಲಿ ನೀರಿನ ಕೊರತೆ ಬಾರದಂತೆ ತಾತ್ಕಾಲಿಕವಾಗಿ ಮೇಲಿನ ಅಣೆಕಟ್ಟೆಗಳಲ್ಲಿ ನೀರನ್ನು ಸಂಗ್ರಹಿಸಿಡಲು ೫೦ ಸಾವಿರಕ್ಕೂ ಹೆಚ್ಚು ಹಣ ವ್ಯಯವಾಗುತ್ತಿತ್ತು. ಆಗ ಇದಕ್ಕೆ ಶಾಶ್ವತ ಪರಿಹಾರವಾಗಿ ೮೯ ಲಕ್ಷ ರೂಪಾಯಿ ವೆಚ್ಚದ ಯೋಜನೆಯನ್ನು ಮೈಸೂರಿನ ಮುಖ್ಯ ಎಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು ನಿರ್ಮಿಸಿದರು. ಮದ್ರಾಸು ಸರ್ಕಾರ ತಂಜಾವೂರಿನ ಭೂಮಿಗೆ ನೀರು ಸಾಕಾಗದೆಂದು ತಗಾದೆ ತೆಗೆದಾಗ ಕೃಷ್ಣರಾಜ ಸಾಗರವನ್ನು ೧೩೦ ಅಡಿ ಎತ್ತರ ನಿರ್ಮಿಸಿ, ೧೨
೪ ಅಡಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ೧೯೨೪ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಗ್ರಾನೈಟ್ಕಲ್ಲು ಮತ್ತು ಸುರ್ಕಿ ಗಾರೆಯಿಂದ ಈ ಜಲಾಶಯ ನಿರ್ಮಿಸಲಾಯಿತು. ನೆರೆಬಂದಾಗ ಜಲಾಶಯಕ್ಕೆ ಅಪಾಯವಾಗದಂತೆ ತೂಬುಗಳನ್ನು ನಿರ್ಮಿಸಲಾಯಿತು. ಜಲಾಶಯದ ಕ್ರೆಸ್ಟ್ ಗೇಟ್ಗಳನ್ನು ತೆರೆದಾಗ ಬಿಳಿಯ ಹಾಲು ನೊರೆಯಂತೆ ಭೋರ್ಗರೆಯುತ್ತಾ ಹೊಳೆಗೆ ಹರಿಯುವ ನೀರಿನ ರಮಣೀಯತೆಯನ್ನು ನೋಡುವುದೇ ಒಂದು ಸೊಗಸು. ವಿಶ್ವೇಶ್ವರಯ್ಯನವರ ಈ ಮಹತ್ಕಾರ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು ಸರ್ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾದಾಗ. ಅವರು ಕಾಶ್ಮೀರದ ಶಾಲಿಮಾನ್ ತೋಟದ ಮಾದರಿಯಲ್ಲೇ ಎರಡೂ ದಡದಲ್ಲಿ ಬೃಂದಾವನ ಉದ್ಯಾನ ನಿರ್ಮಿಸಿದರು. ಇಲ್ಲಿ ಜಲಧಾರೆಗಳನ್ನು, ಚಿಲುಮೆಗಳನ್ನು ನಿರ್ಮಿಸಲಾಯಿತು. ಸಂಗೀತ ಕಾರಂಜಿ ಇಲ್ಲಿನ ಮತ್ತೊಂದು ಆಕರ್ಷಣೆ. ಕತ್ತಲಾವರಿಸುತ್ತಿದ್ದಂತೆ ಬೃಂದಾವನದಲ್ಲಿ ಬೆಳಗುವ ದೀಪಗಳನ್ನು ಮೇಲ್ಭಾಗದಲ್ಲಿ ನಿಂತು ಆನಂದಿಸುವುದೇ ಒಂದು ಸೊಗಸು.
ಮತ್ತೊಂದು ಮಾಹಿತಿ: ಕೆ.ಆರ್.ಎಸ್. ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಆ ಊರಲ್ಲಿ ೬೦೦ ವರ್ಷಗಳಷ್ಟು ಹಳೆಯದಾದ ಚೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವೂ ಇತ್ತು. ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿ ಹೋಗಿದೆ. ಸುಂದರ ಶಿಲ್ಪಕಲಾ ಕೆತ್ತನೆಯ ದೊಡ್ಡ ದೊಡ್ಡ ಕಂಬಗಳು, ಗೋಪುರಗಳುಳ್ಳ ಈ ಶಿಲಾ ದೇಗುಲ ೨೦ ವರ್ಷಗಳ ಬಳಿಕ ೨೦೦೦ನೇ ಇಸವಿ ಮೇ ೨೪ರಂದು ಸಂಪೂರ್ಣ ಗೋಚರಿಸಿತ್ತು. ಮತ್ತೆ ಎರಡು ವರ್ಷದ ಬಳಿಕ ಮತ್ತೆ ಭಾಗಶಃ ಗೋಚರಿಸಿತ್ತು. ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆ ಇದೆ. ಹಿಂದೆ ಇಲ್ಲಿ ಊರಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಬಿಡಾರಗಳು, ದನದ ಕೊಟ್ಟಿಗೆಗಳು, ಸುಂದರ ಪ್ರಾಕಾರ ಇದೆ. ತ್ರಿಕೂಟ, ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದ ಈ ದೇಗುಲ ೧೮ ಕಂಬಗಳಿಂದ ಕೂಡಿದ್ದು ಸುಭದ್ರವಾಗಿತ್ತು. ಈಗ ಇಡೀ ದೇಗುಲವನ್ನು ಸ್ಥಳಾಂತರ ಮಾಡಲಾಗದೆ.
ಮತ್ತೊಂದು ಮಾಹಿತಿ: ಕೆ.ಆರ್.ಎಸ್. ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಆ ಊರಲ್ಲಿ ೬೦೦ ವರ್ಷಗಳಷ್ಟು ಹಳೆಯದಾದ ಚೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವೂ ಇತ್ತು. ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿ ಹೋಗಿದೆ. ಸುಂದರ ಶಿಲ್ಪಕಲಾ ಕೆತ್ತನೆಯ ದೊಡ್ಡ ದೊಡ್ಡ ಕಂಬಗಳು, ಗೋಪುರಗಳುಳ್ಳ ಈ ಶಿಲಾ ದೇಗುಲ ೨೦ ವರ್ಷಗಳ ಬಳಿಕ ೨೦೦೦ನೇ ಇಸವಿ ಮೇ ೨೪ರಂದು ಸಂಪೂರ್ಣ ಗೋಚರಿಸಿತ್ತು. ಮತ್ತೆ ಎರಡು ವರ್ಷದ ಬಳಿಕ ಮತ್ತೆ ಭಾಗಶಃ ಗೋಚರಿಸಿತ್ತು. ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆ ಇದೆ. ಹಿಂದೆ ಇಲ್ಲಿ ಊರಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಬಿಡಾರಗಳು, ದನದ ಕೊಟ್ಟಿಗೆಗಳು, ಸುಂದರ ಪ್ರಾಕಾರ ಇದೆ. ತ್ರಿಕೂಟ, ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದ ಈ ದೇಗುಲ ೧೮ ಕಂಬಗಳಿಂದ ಕೂಡಿದ್ದು ಸುಭದ್ರವಾಗಿತ್ತು. ಈಗ ಇಡೀ ದೇಗುಲವನ್ನು ಸ್ಥಳಾಂತರ ಮಾಡಲಾಗದೆ.
Karnataka (Kannada: ಕರ್ನಾಟಕ [kəɾˈnɑːʈəkɑː] ( listen)), the land of the Kannadigas, is a state in South West India. It was created on 1 November 1956, with the passing of the States Reorganisation Act. Originally known as the State of Mysore, it was renamed Karnataka in 1973.
Karnataka is bordered by the Arabian Sea to the west, Goa to the northwest, Maharashtra to the north, Andhra Pradesh to the east, Tamil Nadu to the southeast, and Kerala to the southwest. The state covers an area of 191,976 square kilometres (74,122 sq mi), or 5.83% of the total geographical area of India. It is the eighth largest Indian state by area, the ninth largest by population and comprises 30 districts. Kannada is the official and most widely spoken language.
The two main river systems of the state are Krishna and its tributaries (Bhima, Ghataprabha, Vedavati, Malaprabha, and Tungabhadra) in the north, and the Cauvery and its tributaries (Hemavati, Shimsha, Arkavathi,
Karnataka is bordered by the Arabian Sea to the west, Goa to the northwest, Maharashtra to the north, Andhra Pradesh to the east, Tamil Nadu to the southeast, and Kerala to the southwest. The state covers an area of 191,976 square kilometres (74,122 sq mi), or 5.83% of the total geographical area of India. It is the eighth largest Indian state by area, the ninth largest by population and comprises 30 districts. Kannada is the official and most widely spoken language.
The two main river systems of the state are Krishna and its tributaries (Bhima, Ghataprabha, Vedavati, Malaprabha, and Tungabhadra) in the north, and the Cauvery and its tributaries (Hemavati, Shimsha, Arkavathi,
Lakshmana Thirtha and Kabini) in the south. Both these rivers flow eastward and fall into the Bay of Bengal.
Though several etymologies have been suggested for the name Karnataka, the generally accepted one is that Karnataka is derived from the Kannada words karu and nādu, meaning elevated land. Karu nadu may also be read as Karu (black) and nadu (region), as a reference to the black cotton soil found in the Bayaluseeme region of Karnataka. The British used the word Carnatic (sometimes Karnatak) to describe both sides of peninsular India, south of the Krishna River.[5]
With an antiquity that dates to the paleolithic, Karnataka has also been home to some of the most powerful empires of ancient and medieval India. The philosophers and musical bards patronised by these empires launched socio-religious and literary movements which have endured to the present day. Karnataka has contributed significantly to both forms of Indian classical music, the Carnatic (Karnataka Music) and Hindustani traditions. Writers in the Kannada language have received the most number of Jnanpith awards in India. Bangalore is the capital city of the state and is at the forefront of the rapid economic and technological development that India is experiencing.
Though several etymologies have been suggested for the name Karnataka, the generally accepted one is that Karnataka is derived from the Kannada words karu and nādu, meaning elevated land. Karu nadu may also be read as Karu (black) and nadu (region), as a reference to the black cotton soil found in the Bayaluseeme region of Karnataka. The British used the word Carnatic (sometimes Karnatak) to describe both sides of peninsular India, south of the Krishna River.[5]
With an antiquity that dates to the paleolithic, Karnataka has also been home to some of the most powerful empires of ancient and medieval India. The philosophers and musical bards patronised by these empires launched socio-religious and literary movements which have endured to the present day. Karnataka has contributed significantly to both forms of Indian classical music, the Carnatic (Karnataka Music) and Hindustani traditions. Writers in the Kannada language have received the most number of Jnanpith awards in India. Bangalore is the capital city of the state and is at the forefront of the rapid economic and technological development that India is experiencing.
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
---ಕುವೆಂಪು
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
---ಕುವೆಂಪು
ಕನ್ನಡ ಭಾಷೆಯ ಲಭ್ಯ ಪ್ರಾಚೀನ ದಾಖಲೆಯೆಂದರೆ ಕ್ರಿ.ಶ. ಸುಮಾರು 450ರ ಹಲ್ಮಿಡಿ ಶಾಸನ. ಅದರ ನಂತರದಲ್ಲಿ ಹಲವಾರು ಶಾಸನಗಳು ಲಭ್ಯವಿದ್ದು ಕನ್ನಡ ಗದ್ಯಪದ್ಯಗಳ ಶ್ರೇಷ್ಠ ಮಾದರಿಗಳನ್ನು ನಮಗೆ ಪರಿಚಯಿಸು ತ್ತವೆ. ವ್ಯಾಕರಣದ ಕಟ್ಟುಪಾಡುಗಳನ್ನು ನಿಯತವಾಗಿ ಪಾಲಿಸುವ ಒಂದು ವ್ಯವಸ್ಥಿತ ಹಾಗೂ ಸಮೃದ್ಧ ಭಾಷೆಯಾಗಿ ಕನ್ನಡವು ಬೆಳೆದಿರುವುದನ್ನು ಇವುಗಳಲ್ಲಿ ಕಾಣುತ್ತೇವೆ. ಹೀಗಾಗಿ ಈ ಅವಧಿಯಲ್ಲಿ ಕನ್ನಡ ವ್ಯಾಕರಣಗಳು ಯಾವು ದಾದರೂ ರಚಿತವಾಗಿ ಬಳಕೆಯಲ್ಲಿದ್ದಿರಬಹುದೇ ಎಂಬ ಸಂಶಯ ಮೂಡಲು ಅವಕಾಶವಿದೆ. ಆದರೆ ಲಭ್ಯ ಕನ್ನಡ ಕೃತಿಗಳಲ್ಲಿ ಮೊದಲನೆಯದಾದ ‘ಕವಿರಾಜ ಮಾರ್ಗ’ದ (ಕ್ರಿ.ಶ. 850) ಕಾಲದಿಂದೀಚೆಗಷ್ಟೇ ಕನ್ನಡ ವ್ಯಾಕರಣ ಕೃತಿಗಳ ರಚನೆ ಕಂಡುಬರುವುದು. ಕವಿರಾಜಮಾರ್ಗಕ್ಕೂ ಮುಂಚೆ ಕನ್ನಡ ವ್ಯಾಕರಣ ಗ್ರಂಥವೊಂದು ರಚಿತವಾಗಿದ್ದಿರಬಹುದಾದರೂ ಹಾಗೆ ಖಂಡಿತವಾಗಿ ಹೇಳಲು ಸಾಕ್ಷ್ಯಾಧಾರಗಳು ಇಲ್ಲ. ಹೀಗಾಗಿ ಕನ್ನಡ ವ್ಯಾಕರಣಗಳ ಪರಂಪರೆಯು ಪ್ರಾರಂಭ ವಾಗುವುದು ಎರಡನೆಯ ನಾಗವರ್ಮನ (ಕ್ರಿ.ಶ. ಸುಮಾರು 1050) ‘ಶಬ್ದಸ್ಮೃತಿ’ ಹಾಗೂ ‘ಕರ್ಣಾಟಕ ಭಾಷಾ ಭೂಷಣ’ಗಳಿಂದಲೇ ಎಂದು ಹೇಳಬೇಕಾಗುತ್ತದೆ.
Subscribe to:
Comments (Atom)






